ಆದರೆ ನಾವೀಗ ಬಹಳ ಬೆಳೆದಿದ್ದೇವೆ. ಕಲಿತಿದ್ದೇವೆ. ಮದುವೆಯಾಗಿದ್ದೇವೆ. ಮಕ್ಕಳನ್ನು ಹೊಂದಿದ್ದೇವೆ, ದುಡಿಯುತಿದ್ದೇವೆ, ಚೆನ್ನಾಗಿ ಬದುಕುತ್ತಿದ್ದೇವೆ, ಅಥವಾ ಹಾಗೆ ಭಾವಿಸಿದ್ದೇವೆ.
ನಮ್ಮ ಮಕ್ಕಳೇ ನಮ್ಮ ಪ್ರಪಂಚ, ದುಡಿಯುವುದೇ ಜೀವನದ ಗುರಿ ಎಂದೆಲ್ಲ ಯೋಚಿಸಿ ನಿನ್ನೆಗಳನ್ನು ಮರೆತಿದ್ದೇವೆ. ನಮ್ಮ ಹೆತ್ತವರನ್ನು ಕಡೆಗಣಿಸಿದ್ದೇವೆ. ಹೇಗಿದ್ದೀರಿ ಎಂದು ಕೇಳಲು ಮರೆತಿದ್ದೇವೆ. ನಾವು ಸಣ್ಣವರಿದ್ದಾಗ, ತಾವು ಉಪವಾಸವಿದ್ದು, ನಮಗೆ ಬೇಕಾದ ಸವಲತ್ತು ಕೊಟ್ಟ ಹೆತ್ತವರು ನೆನಪಿಲ್ಲ ಎಂದರೆ ಎಂತಹ ನೈತಿಕತೆ ಇದು? ಅವರ ಹತ್ತಿರ ಹೋಗಲು, ಮಾತನಾಡಲು, ಕಷ್ಟಸುಖ ವಿಚಾರಿಸಲು, ಏನು ಬೇಕು ಎಂದು ಕೇಳಲು ನಮಗೆ ಸಮಯವಿಲ್ಲವೇ? ಅಥವಾ ಮನಸಿಲ್ಲವೇ? ಅನಾರೋಗ್ಯ , ಅಸಮರ್ಥತೆ ಕಾಡುವ ಈ ವಯಸ್ಸಿನಲ್ಲಿ ಅವರು ಏನು ಮಾಡಬೇಕು? ನಮ್ಮ ನಿರ್ಲಕ್ಷ್ಯಕ್ಕೆ ಅವರ ಮನಸ್ಸು ಎಷ್ಟು ನೊಂದಿರಬಹುದು? ನಾವೀಗ ಎಚ್ಚೆತ್ತುಕೊಳ್ಳಬೇಕಿದೆ.
* ಈ ಬದುಕು ಭಾರವಾಗದಂತೆ ನಾವು ಅವರನ್ನು ನೋಡಿಕೊಳ್ಳಬೇಕಿದೆ.
* ನಮ್ಮ ಪ್ರೀತಿ, ಕಾಳಜಿ ಅವರಿಗೆ ಬೇಕಿದೆ.
* ಅವರ ಆರೋಗ್ಯ, ಯೋಗಕ್ಷೇಮ ವಿಚಾರಿಸುವುದು ನಮ್ಮ ಕರ್ತವ್ಯ.
* ಅವರ ಮಾತನ್ನು ತಾಳ್ಮೆಯಿಂದ ಕೇಳುವುದು ನಮ್ಮ ಜವಾಬ್ದಾರಿ.
*ಅವರ ಬೇಕು, ಬೇಡಗಳನ್ನು ಗಮನಿಸಿ, ನೆರವೇರಿಸುವುದು ನಮ್ಮ ಬಾಧ್ಯತೆ.
* ಅವರನ್ನು ತುಂಬಾ ಗೌರವದಿಂದ ನೋಡಿಕೊಳ್ಳಬೇಕು.
* ಅವರು ತಮ್ಮ ಇಚ್ಛೆಯಂತೆ ನಡೆದುಕೊಳ್ಳಲು ಬಿಡಬೇಕು.
* ಅವರಿಗೆ ಬೇಕಾದ ಔಷಧಿ, ಬಟ್ಟೆ ಬರೆ, ದಿನಸಿ ಇತರ ಖರ್ಚುಗಳನ್ನು ನಿಭಾಯಿಸಲು ಅವರಿಗೆ ಅಗತ್ಯ ಸಹಕಾರ ನೀಡಬೇಕು.
*ಅನಿವಾರ್ಯವಾದಾಗ ಅವರ ಜೊತೆ ಇರಲು ನಾವು ಸಿದ್ದವಿರಬೇಕು.
* ಅವರ ಜೀವನ ಸಂದ್ಯೆ ಖುಷಿಯಾಗಿ ಕಳೆಯುವಂತೆ ಕಾಳಜಿ ವಹಿಸಬೇಕು.
* ನಾವು ಅವರನ್ನು ನೋಯಿಸಿದರೆ, ಅದು
ನಮ್ಮನ್ನು ಯಾವಾಗಲೂ ಮಾಡುತ್ತದೆ.
ಹೆತ್ತವರೆಂದೂ ಭಾರವಾಗುವುದು ಬೇಡ. ನಮಗೆ ಅವರ ಋಣ ತೀರಿಸುವ ಒಂದು ಸಣ್ಣ ಅವಕಾಶ ಎಂದು ತಿಳಿಯೋಣ. ನಮಗೆ ಬಾಳು ಕೊಟ್ಟವರಿಗೆ ನಾವು ಊರುಗೋಲಾಗೋಣ .
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ