ಮನಸಿನ ನೆಮ್ಮದಿಗಾಗಿ

Page title
ಅರಿತರೂ ಅರಿಯದಂತೆ,
ಕಂಡರೂ ಕಾಣದಂತೆ,
ಕೇಳಿದರೂ ಕೇಳದಂತೆ,
ಅತ್ತರೂ ಹೇಳದಂತೆ ,
ನೊಂದರೂ ಕಾಣದಂತೆ,
ನಿನ್ನ ಪಾಡಿಗೆ ನೀನೀರು,
ನಿನ್ನ ಮನಸಿನ ನೆಮ್ಮದಿಗಾಗಿ.

ಕೆದಕಿದಷ್ಟೂ ರಾಡಿಯಾಗುವ,
ತಿಳಿದಷ್ಟು ಮನಸು ನೋಯುವ,
ಕೇಳಿದಷ್ಟು ಮೌನ ವಹಿಸುವ, 
ಭಾವಬಂಧನದಿಂದ ಹೊರಗೆ ಬಂದು,
ಹೊಸತು ಹುಡುಕುವ ತವಕ ನಮ್ಮಲಿರಲಿ,
ನಿಟ್ಟುಸಿರು ಬಿಟ್ಟು ಮನಸು ಹಗುರಾಗಿಸುವ,
ವಿದ್ಯೆ ಮರೆಯದಿರಲಿ.

ಎಲ್ಲ ಹಳೆ ನೋವುಗಳ, ಕೋಪ ತಾಪಗಳ,
ಬಿಟ್ಟು ಸಾಗೋಣ ಮುಂದೆ,
ಒಳಗಡೆಯೆ ಮುಚ್ಚಿಟ್ಟು, ಅದು ವೃಣವಾಗುವ ಮುನ್ನ, ತಡೆಯದೆ ಹಚ್ಚೋಣ ನಗುವಿನ ಮುಲಾಮು, 
ಹರಿದು ನದಿಯಾಗಲಿ ಕಣ್ಣೀರ ಧಾರೆ,
ಹೊಸ ಹುಲ್ಲು ಚಿಗುರಲಿ, 
ಬರಡು ಮರುಭೂಮಿಯಲಿ ,

ಕೆಡುಕು ಮಾಡುವ ಕೈಗಳಿರಲಿ,
ಅಣಕವಾಡುವ ಬಾಯಿಯಿರಲಿ,
ಕೆಂಡ ಕಾರುವ ಕಣ್ಣೆ ಇರಲಿ,
ಅಳುಕಬೇಡ, ಅಂಜಬೇಡ,
ನಂಬಿದವನು ಕಾವ ನೋಡ,
ಮನದಲಿನಿತು ನೋಯಬೇಡ,  
ಅವನ ಲೀಲೆ ಮರೆಯಬೇಡ.
ಒಳಿತ ದಾರಿ ತೊರೆಯಬೇಡ,
ನಿನ್ನ ಮನಸು ನೀನು ನೋಡ,
ನಿನ್ನ ಮನಸು ನೀನು ನೋಡ.



ಕಾಮೆಂಟ್‌ಗಳಿಲ್ಲ:

CBSC ಯಿಂದ ಸ್ಟೇಟ್ ಬೋರ್ಡ್ ಗೆ

ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSC ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ...