ಒಲವಿನ ಆಸರೆ

 ಬದುಕಿಗೆಂದು ಬೇಕಿದೆ,ಒಲವಿನೊಂದು ಆಸರೆ,

ತಾನತ್ತರೆ ನೋಯುವ, ನಕ್ಕರೆ ನಲಿಯುವ,

ಅನುಕ್ಷಣವು ಬಯಸುವ, ನೆರಳಂತೆ ಕಾಯುವ,

ಮಾತೆಲ್ಲ ಕಿವಿಯಾಗುವ, ಆಡದೇ ಅರಿಯುವ,

ಆಸರೆಗೆ ಹೆಗಲಾಗುವ ಜೊತೆಯೊಂದು ಬೇಕಿದೆ.


ತಪ್ಪಿದರೆ ತಿದ್ದುವ, ಬಿದ್ದಾಗ ಎತ್ತುವ,

ಕಷ್ಟದಲಿ ಕೈ ಹಿಡಿಯುವ, ನನಗಾಗಿಯೇ ಮಿಡಿಯುವ,

ಹೃದಯವೊಂದು ಬೇಕಿದೆ ಏಳೇಳು ಜನ್ಮಕೂ.

ಕಣ್ಣಮುಂದೆ ಅಪ್ಸರೆಯರು ಸುಳಿದರೂ,

ಕಾಡುವ ಏಕೈಕ ವ್ಯಕ್ತಿ ತಾನಾಗಬೇಕು,

ಇದು ಪ್ರತಿ ಜೀವದ ಕನಸು.


ತನ್ನಂತೆ ನಮ್ಮನ್ನು ಪ್ರೀತಿಸುವ,

ತಾಯಂತೆ ಗೌರವಿಸುವ, ಮಗುವಂತೆ ಲಾಲಿಸುವ ,

ಹೃದಯದಂತೆ ಜೋಪಾನ ಮಾಡುವ,

ನಮಗಾಗಿಯೇ ಮಿಡಿಯುವ, 

ಹಾಲಂತಹ ತಿಳಿಮನಸಿನ,

ಮೃದುಹೃದಯವು ಬೇಕಿದೆ.


ಸ್ವರ್ಗದಾ  ಬಾಗಿಲಲಿ ನಿಂತರೂ,

ಇಂದ್ರ ಚಂದ್ರ ಮುಂದೆಯೇ ಸುಳಿದಾಡಿದರೂ, 

ಪ್ರತಿಕ್ಷಣವೂ ನೀ ಮಾತ್ರ ಕಾಡಬೇಕು.

ಮರೆಯದೆ ಜೊತೆಗಿರಬೇಕು.

ಮರೆತರೂ ಕೋಪಿಸದೆ ಕೈ ಹಿಡಿಯಬೇಕು.


ಬದುಕಿರುವ ಪ್ರತಿಕ್ಷಣವೂ ನಿನ್ನ ಜೊತೆಗಿರಬೇಕು, 

ಬದುಕಿನ ಬಾನಿನಲಿ ನಿನ್ನ ಒಲವಿರಬೇಕು,

ಆ ಒಲವು ಬಾಡದ ಹೂವಾಗಬೇಕು,

ಬಿಸಲ ನಾ ನೋಡದಂತೆ ನೀ ಕಾಯಬೇಕು,

ಕೊನೆಗೆ ನಿನ್ನದೇ ಮಡಿಲಲ್ಲಿ ನಾ ಮಲಗಬೇಕು.

ನಾ ಮಗುವಾಗಬೇಕು, ನಿನ್ನ ಒಲವ ತೀರಿಸಲು

ನಾ ಮಗುವಾಗಬೇಕು, ನಗುವ ಮಗುವಾಗಬೇಕು.









ಕಾಮೆಂಟ್‌ಗಳಿಲ್ಲ:

CBSC ಯಿಂದ ಸ್ಟೇಟ್ ಬೋರ್ಡ್ ಗೆ

ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSC ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ...