ಎಲ್ಲಿದೆ ನೆಮ್ಮದಿ?


ಬದುಕಿಗೆ ನೆಮ್ಮದಿ ಬಹಳ ಮುಖ್ಯ. ಅದನ್ನು ಖರೀದಿಸಲು ಸಾದ್ಯವಿಲ್ಲ. ಹಾಗಾದರೇ ಅದು ಎಲ್ಲಿದೆ?
ಎಷ್ಟು ಹಣವಿದ್ದರೇನು? ತಿನ್ನಲಾಗುವುದಿಲ್ಲ, ಅಲ್ಲವೇ? ಹೊಟ್ಟೆ ಹಸಿದಾಗ ಊಟ ಬೇಕು, ಬಾಯಾರಿದಾಗ ನೀರು ಬೇಕು, ಉಸಿರಾಡಲು ಶುದ್ಧ ಗಾಳಿ ಬೇಕು, ಇವೆಲ್ಲ ಮಾಡಲು ಆರೋಗ್ಯ ಬೇಕು. ಉತ್ತಮ ಆರೋಗ್ಯಕ್ಕಾಗಿ ಏನು ಬೇಕು?

ಮನಸಿಗೆ ನೆಮ್ಮದಿ ಬೇಕು. ಅದು ನೆಮ್ಮದಿಯಾಗಿ ಇದ್ದರೆ ಆರೋಗ್ಯ ಚೆನ್ನಾಗಿ ಇರುತ್ತದೆ. 

ಮನಸನ್ನು ಚೆನ್ನಾಗಿ ಇಟ್ಟುಕೊಳ್ಳಲು 

1.ಕೋಪ ಕಡಿಮೆ ಮಾಡಬೇಕು. ಅದಕ್ಕಾಗಿ
*ದೀರ್ಘವಾಗಿ ಉಸಿರಾಡಿ.
*ಒಂದರಿಂದ ನೂರರವರೆಗೆ ನಿಧಾನವಾಗಿ ಎಣಿಸಿ.
*ಮೌನವಾಗಿ ಕುಳಿತುಕೊಳ್ಳಿ.
*ಕೋಪಕ್ಕೆ ಕಾರಣವೇನೆಂದು ಯೋಚಿಸಿ.
*ಕಾರಣ ಚಿಕ್ಕದೆಂದು ಅರ್ಥವಾದಾಗ ಮನಸು ತಿಳಿಯಾಗುವುದು.
2.ಅತಿಯಾಸೆಯನ್ನು ಬಿಟ್ಟು ಇರುವುದರಲ್ಲಿ ಖುಷಿಯಾಗಿ ಇರಬೇಕು
3.ಇನ್ನೊಬ್ಬರನ್ನು ನೋಡಿ ಹೊಟ್ಟೆಕಿಚ್ಚು ಪಡುವ ಬದಲು ನಾವು ಅವರಿಗೆ ಒಳಿತನ್ನು ಬಯಸಬೇಕು.
4.ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು.
5.ಕಷ್ಟಪಟ್ಟು ದುಡಿಯುವ ಮನಸಿರಬೇಕು.
6.ದೇವರ ಮೇಲೆ ದೃಢವಾದ ನಂಬಿಕೆ, ಭಕ್ತಿ ಇರಬೇಕು.
7.ಸಕಾರಾತ್ಮಕ ಚಿಂತನೆಗಳನ್ನು ಮಾಡಬೇಕು.
8.ಎಲ್ಲರಿಗೂ ಒಳಿತನ್ನು ಬಯಸುವ ಒಳ್ಳೆಯ ಮನಸಿರಬೇಕು.
9.ಬೇರೆಯವರನ್ನು ತನ್ನಂತೆ ಭಾವಿಸಬೇಕು .
10.ತನ್ನವರನ್ನು ಮಾತ್ರವಲ್ಲ ಇತರನ್ನು ಗೌರವಿಸಬೇಕು.
11.ಯಾರಿಗೂ ಕೇಡು ಮಾಡಬೇಡಿ, ಆಗ ಅವರು ನಮಗೆ ತೊಂದರೆ ಕೊಡುತ್ತಾರೆ ಎಂಬ ಭಯವಿರುವುದಿಲ್ಲ.
12.ಯೋಗಾಭ್ಯಾಸ, ಪ್ರಾಣಾಯಾಮ, ಧ್ಯಾನ ಮುಂತಾದವು ಮನಸನ್ನು ತಿಳಿಗೊಳಿಸುತ್ತವೆ.
13.ಮಾಡುವ ಕೆಲಸದ ಬಗ್ಗೆ ಮುಂದಾಲೋಚನೆ ಇರಲಿ.
14.ಪ್ರತಿ ಹೆಜ್ಜೆ ಇಡುವ ಮುನ್ನ ಹತ್ತು ಬಾರಿ ಯೋಚಿಸಿ.
15.ಮಾತು ಮುತ್ತಿನಂತಿರಲಿ. ಹಿತವಾಗಿರಲಿ.

ಹೀಗೆ ನಾವು ಒಳ್ಳೆಯ ಮನಸಿನಿಂದ ಯೋಚಿಸಿದರೆ ಎಲ್ಲವೂ ಒಳ್ಳೆಯದಾಗಿ ಕಾಣಿಸುತ್ತದೆ. ನೆಮ್ಮದಿ ತಾನೆ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಒಳ್ಳೆಯ ಆರೋಗ್ಯ, ನಿದ್ದೆ ಸಂತೃಪ್ತಿ ನಮ್ಮದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.






ಕಾಮೆಂಟ್‌ಗಳಿಲ್ಲ:

CBSC ಯಿಂದ ಸ್ಟೇಟ್ ಬೋರ್ಡ್ ಗೆ

ಈಗೀಗ ಹೆಚ್ಚಾಗಿ ಮಕ್ಕಳು 10ನೇ ತರಗತಿಯವರೆಗೆ CBSC ಬೋರ್ಡಿನಲ್ಲಿ ಕಲಿಯುತ್ತಾರೆ. ಕೆಲವೊಂದು ವಿದ್ಯಾರ್ಥಿಗಳು ಪಿಯುಸಿಯನ್ನು ಅದೇ ಬೋರ್ಡಿನಲ್ಲಿ ಮುಂದುವರೆಸುತ್ತಾರೆ. ಹೆಚ...