ಪೋಸ್ಟ್‌ಗಳು

ಮೇ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗುರು ವಂದನೆ-1

ನಮ್ಮ ಬಾಳಲ್ಲಿ ಹಲವು ಗುರುಗಳು ಬಂದಿರುತ್ತಾರೆ. ಹಾಗೆಂದು ಅವರೆಲ್ಲ ನೆನಪಿನಲ್ಲಿ ಉಳಿಯುವುದಿಲ್ಲ. ಕೆಲವರು ಮಾತ್ರ ಸದಾಕಾಲ ಮನದಾಳದಲ್ಲಿ ಬೆಳಗುವ ನಂದಾ ದೀಪದಂತೆ, ನಿರಂತರವಾಗಿರುತ್ತಾರೆ. ಸದಾ ಕಾಡುವ ಅವರಿಗೆ ಸಣ್ಣದೊಂದು ನುಡಿ ನಮನ. ವಲಿಂಡನ ಅಮ್ಮ ಮೂರನೇ ತರಗತಿಯ ಕ್ಲಾಸ್ ಟೀಚರ್ ಅವರು. ಪ್ರೀತಿಯಿಂದ ಪಾಠ ಕಲಿಸಿದ ಒಳ್ಳೆಯ ಶಿಕ್ಷಕಿ ಅವರು. ಮೊದಲ ಪರೀಕ್ಷೆ ಮುಗಿದಾಗ ತರಗತಿಗೆ ನಾಲ್ಕನೇ ಸ್ಥಾನ. ಕಲಿಕೆಯಲ್ಲಿ ಸಾದಾರಣವಾಗಿದ್ದ ನಾನು, ಖುಷಿಯಾಗಿಯೇ ಇದ್ದೆ. ಆದರೆ, ಆ ದಿನ ಟೀಚರ್ ಹೇಳಿದ ಮಾತು ಇಂದೂ ನೆನಪಿದೆ. ನಿನ್ನ ಅಣ್ಣ ಕ್ಲಾಸಿಗೆ ಫಸ್ಟ್ ಅಂತೆ, ನೀನು ಪ್ರಯತ್ನ ಮಾಡು, ಕ್ಲಾಸಿಗೆ ಫಸ್ಟ್ ಬಾ ಎಂದಿದ್ದರು. ಅವರ ಬಾಯಿ ಹರಕೆಗೋ, ನನ್ನ ಪ್ರಯತ್ನಕ್ಕೋ ಗೊತ್ತಿಲ್ಲ, ಮುಂದಿನ ಪರೀಕ್ಷೆಯಲ್ಲಿ ಕ್ಲಾಸಿಗೆ ಫಸ್ಟ್. ನನಗಿಂತ ಹೆಚ್ಚು ಅವರೇ ಸಂತಸ ಪಟ್ಟವರು ಅವರು. ಮುಂದಿನ ತರಗತಿಗೆ ಹೋದರೂ ಆಗಾಗ ಸಿಕ್ಕಾಗ ಚೆನ್ನಾಗಿ ಓದು ಎನ್ನುತ್ತಿದ್ದರು. ಆ ಶಾಲೆಯಿಂದ ಬೇರೆ ಕಡೆ ಹೋದರೂ, ಸಿಕ್ಕಾಗ ಹೇಗಿದ್ದಿ? ಓದು ಹೇಗಿದೆ ಎಂದು ವಿಚಾರಿಸುತ್ತಿದ್ದರು. ಪದವಿ ಮುಗಿಸಿ, ಹತ್ತಿರದ ಶಾಲೆಯಲ್ಲಿ ಟೀಚರಾಗುವ ಅವಕಾಶ ಸಿಕ್ಕಿತು. ಆಗ ಭೇಟಿಯಾದಾಗ ಅವರ  ಖುಷಿಗೆ ಪಾರವೇ ಇರಲಿಲ್ಲ. ಇವಳು ನನ್ನ ವಿದ್ಯಾರ್ಥಿನಿ ಎಂದು ಎಲ್ಲರಿಗೂ ಪರಿಚಯಿಸುತ್ತಿದ್ದರು. ಅವರ ಪ್ರೀತಿ ಕಾಳಜಿಗೆ ಸರಿಸಾಟಿಯೇ ಇಲ್ಲ. ನಾನೀಗ ಕಲಿತ ಶಾಲೆಯಿಂದ ಬಲು ದೂರದಲ್ಲಿದ್ದೇನೆ. ಅವರು ಕೆಲಸದಿಂದ ...

ಅಮ್ಮನಲ್ಲದೇ ಬೇರಾರು?

ಹೆತ್ತ ತಾಯಿ ದೇವಕಿಗಿಂತ, ಮಿಗಿಲಾಗಿಯೇ ಸಲಹಿದಳು, ಆ ತಾಯಿ ಯಶೋದೆ, ಅಮ್ಮನೆಂಬ ಹೆಸರಿಗೆ ಅವಳು, ಅನ್ವರ್ಥವೆ ಆದವಳು. ಕುಂತಿ ಹೆತ್ತ ಮಗುವನ್ನು, ಜಗಕೆ ಹೆದರಿ ತ್ಯಜಿಸಿದಳು. ಮಗುವು ಇಲ್ಲದ ಕೊರಗನ್ನು ಕರ್ಣನ ಸಲಹಿ, ಮರೆತವಳು, ರಾದೆಯಲ್ಲದೆ ಬೇರಾರು? ರಾಮನ ಮೇಲಿನ ಕೈಕೆಯ ಪ್ರೇಮ, ಆಯಿತು ಕರುಗುವ ಹಿಮ, ಭರತನ ಮೇಲಿನ ಕುರುಡು ಪ್ರೇಮ, ತಾಯಿ ಮರೆತಳು ನೀತಿ ನಿಯಮ. ಪತಿವ್ರತೆಯಾಗುವ ಕನಸಿನಲಿ, ಕುರುಡಿಯಾದಳು ಗಾಂಧಾರಿ , ಮಕ್ಕಳ ತಪ್ಪನು ತಿದ್ದಿ, ಹೇಳಲಿಲ್ಲ ಅವರಿಗೆ ಬುದ್ಧಿ, ಬಾಲ ನರೇಂದ್ರನ ತಾಯಿ, ಮಾತೆ ಭುವನೇಶ್ವರಿ, ಆದಿ ಮೀರಿ, ಅಂತ್ಯವಿಲ್ಲದ, ಪರಮಾತ್ಮನ ಪರಿಚಯಿಸಿದಳು. ಮೋಹನದಾಸ ಗಾಂಧಿeಜಿಯಾಗುವ ಮುನ್ನ, ಸತ್ಯನಿಷ್ಟೆಯ, ಆಚಾರವಿಚಾರಗಳ, ಸೂಕ್ಷ್ಮ ತಿಳಿಸಿದ, ಬುದ್ಧಿ ಹೇಳಿದ, ಮಾತೆ ಪುತಲಿ ಬಾಯಿ.  ರೂಪಗಳು ಹಲವಾರು, ದಾರಿಗಳು ನೂರಾರು, ಅಂತರಾಳ ಒಂದೇ, ಮಗುವೇ ಮಾಣಿಕ್ಯ.. ಬಾಳ ದಾರಿಗೆ ಬೆಳಕಾದವಳು, ಬಿಸಿಲ ಬೇಗೆಗೆ ನೆರಳಾದವಳು, ಒಲುಮೆ ಧಾರೆಯ ಸೊದೆಯಾದವಳು, ಯಮ ನಿಯಮಗಳ ಗುರುವಾದವಳು, ತಪ್ಪುತಿದ್ದುವ ತಂದೆಯಾದವಳು, ಬೇಡಿದ್ದು ನೀಡುವ ಕಾಮಧೇನು ಅವಳು, ನೊಂದ ಕಣ್ಣೀರು ಎಂದು ಕಾಣಿಸದಂತೆ, ಜಾದು ಮಾಡಿದವಳು. ಅಂದಷ್ಟೂ ಕಿವಿತೆರೆಯುವವಳು, ಬುದ್ಧಿ ಹೇಳಲು ಎಂದು ಮರೆಯದವಳು, ತನ್ನ ತಾಳ್ಮೆಗೆ ಭೂಮಿಯಾಗುವಳು, ಮೇರೆ ಮೀರಿದರೆ ಶಕ್ತಿಯಾದವಳು, ಹೆಸರೇ ಇಲ್ಲದೆ, ಉಸಿರೇ ಆದವಳು, ಮೇಣದಂತೆ ಕರಗಿದರು, ನಗುನಗುತ ನಡೆವವಳು, ಅಮ್ಮನಲ್ಲದೆ ಬೇ...

ಮನಸಿನ ನೆಮ್ಮದಿಗಾಗಿ

ಅರಿತರೂ ಅರಿಯದಂತೆ, ಕಂಡರೂ ಕಾಣದಂತೆ, ಕೇಳಿದರೂ ಕೇಳದಂತೆ, ಅತ್ತರೂ ಹೇಳದಂತೆ , ನೊಂದರೂ ಕಾಣದಂತೆ, ನಿನ್ನ ಪಾಡಿಗೆ ನೀನೀರು, ನಿನ್ನ ಮನಸಿನ ನೆಮ್ಮದಿಗಾಗಿ. ಕೆದಕಿದಷ್ಟೂ ರಾಡಿಯಾಗುವ, ತಿಳಿದಷ್ಟು ಮನಸು ನೋಯುವ, ಕೇಳಿದಷ್ಟು ಮೌನ ವಹಿಸುವ,  ಭಾವಬಂಧನದಿಂದ ಹೊರಗೆ ಬಂದು, ಹೊಸತು ಹುಡುಕುವ ತವಕ ನಮ್ಮಲಿರಲಿ, ನಿಟ್ಟುಸಿರು ಬಿಟ್ಟು ಮನಸು ಹಗುರಾಗಿಸುವ, ವಿದ್ಯೆ ಮರೆಯದಿರಲಿ. ಎಲ್ಲ ಹಳೆ ನೋವುಗಳ, ಕೋಪ ತಾಪಗಳ, ಬಿಟ್ಟು ಸಾಗೋಣ ಮುಂದೆ, ಒಳಗಡೆಯೆ ಮುಚ್ಚಿಟ್ಟು, ಅದು ವೃಣವಾಗುವ ಮುನ್ನ, ತಡೆಯದೆ ಹಚ್ಚೋಣ ನಗುವಿನ ಮುಲಾಮು,  ಹರಿದು ನದಿಯಾಗಲಿ ಕಣ್ಣೀರ ಧಾರೆ, ಹೊಸ ಹುಲ್ಲು ಚಿಗುರಲಿ,  ಬರಡು ಮರುಭೂಮಿಯಲಿ , ಕೆಡುಕು ಮಾಡುವ ಕೈಗಳಿರಲಿ, ಅಣಕವಾಡುವ ಬಾಯಿಯಿರಲಿ, ಕೆಂಡ ಕಾರುವ ಕಣ್ಣೆ ಇರಲಿ, ಅಳುಕಬೇಡ, ಅಂಜಬೇಡ, ನಂಬಿದವನು ಕಾವ ನೋಡ, ಮನದಲಿನಿತು ನೋಯಬೇಡ,   ಅವನ ಲೀಲೆ ಮರೆಯಬೇಡ. ಒಳಿತ ದಾರಿ ತೊರೆಯಬೇಡ, ನಿನ್ನ ಮನಸು ನೀನು ನೋಡ, ನಿನ್ನ ಮನಸು ನೀನು ನೋಡ.